• Css Template Preview
  • Css Template Preview
  • Css Template Preview
  • Css Template Preview

ಕನಸಿನ ಮನೆಯ ಹರಿಕಾರ

ದ.ಕ. ಜಿಲ್ಲೆ ನಿರ್ಮಿತಿ ಕೇಂದ್ರ ದಕ್ಷಿಣ ಕನ್ನಡ ಜಿಲ್ಲೆಯೆಂದರೆ ಅದ್ಭುತ ಕರಾವಳಿಯ, ವಿಶಿಷ್ಟ ಪ್ರಾಕೃತಿಕ ̧ಸಂಪತ್ತಿನ ಪ್ರದೇಶವೆಂದು ಹೆಸರು ಪಡೆದಿರುವ ಸ್ಥಳ. ಈ ಜಿಲ್ಲೆಯ ಅಭಿವೃದ್ಧಿ ಕಾರ್ಯಗಳಲ್ಲಿ ತನ್ನದೇ ಆದ ಕೊಡುಗೆ ನೀಡುತ್ತಾ ಬಂದಿದೆ ದ.ಕ. ನಿರ್ಮಿತಿ ಕೇಂದ್ರ. ದೇಶದ ವಿವಿಧ ಪ್ರಯೋಗಾಲಯಗಳಲ್ಲಿ ಕಾಲಕಾಲಕ್ಕೆ ಹೊರಬರುತ್ತಿರುವ ಹೊಸ ಹೊಸ ತಂತ್ರಜ್ಞಾನಗಳನ್ನು ಶೀಘ್ರವಾಗಿ ಜನರಿಗೆ ತಲುಪಿಸುವ ಮಾಧ್ಯಮವನ್ನಾಗಿ ಜಿಲ್ಲಾ ನಿರ್ಮಿತಿ ಕೇಂದ್ರಗಳು ಅಸ್ಥಿತ್ವಕ್ಕೆ ಬಂದವು. 1988ರಲ್ಲಿ ಕೇರಳದಲ್ಲಿ ಪ್ರಾಯೋಗಿಕವಾಗಿ ̧ಸ್ಥಾಪನೆಗೊಂಡ ಸಂಸ್ಥೆ ಮುಂದೆ ದೇಶಾದ್ಯಂತ ಸ್ಥಾಪನೆಯಾಯಿತು.ವಸತಿ ಮತ್ತು ನಗರಾಭಿವೃದ್ಧಿ ಪ್ರಾಧಿಕಾರ (ಹುಡ್ಕೊ) ಇದನ್ನು ಪ್ರವರ್ತಿಸಿದ್ದು. ದ.ಕ. ಜಿಲ್ಲಾ ನಿರ್ಮಿತಿ ಕೇಂದ್ರವು 1992 ರಿಂದ ̧ಸುರತ್ಕಲ್ ಎನ್.ಐ.ಟಿ.ಕೆ ಆವರಣದಲ್ಲಿ ಕಾರ್ಯ ನಿರ್ವಹಿಸುತ್ತಿದೆ. ಇದು ಒಂದು ನೊಂದಾಯಿತ ಸಂಸ್ಥೆಯಾಗಿದ್ದು,, ರಾಜ್ಯ ಮಟ್ಟದಲ್ಲಿ ಹುಡ್ಕೋ ಮತ್ತು ಕರ್ನಾಟಕ ರಾಜ್ಯ ನಿರ್ಮಾಣ ಕೇಂದ್ರ (ಕಾರ್ನಿಕ್)ಗಳು ನಿರ್ಮಿತಿ ಕೇಂದ್ರಗಳಿಗೆ ಮಾರ್ಗದರ್ಶನ ನೀಡುತ್ತಿವೆ. ರಾಜೀವಗಾಂಧಿ ಗ್ರಾಮೀಣ ವಸತಿ ನಿಗಮದ ಆಡಳಿತಕ್ಕೆ ಇವು ಒಳಗೊಂಡಿರುತ್ತದೆ. ರಾಜ್ಯ ̧ಸರ್ಕಾರವು ಜಿಲ್ಲಾ ಪಂಚಾಯತ್ ಮೂಲಕ ಇದಕ್ಕೆ ಸಹಾಯಧನ ಒದಗಿಸುತ್ತದೆ. ಜಿಲ್ಲಾದಿಕಾರಿಗಳು ಇದರ ಅಧ್ಯಕ್ಷರಾಗಿದ್ದು,ಜಿಲ್ಲಾ ಪಂಚಾಯತ್ ಮುಖ್ಯ ಕಾರ್ಯ ನಿರ್ವಾಹಕ ಅಧಿಕಾರಿಯವರು ಇದರ ಕಾರ್ಯಾಧ್ಯಕ್ಷರಾಗಿರುತ್ತಾರೆ. ವಿವಿಧ ಇಲಾಖಾದಿಗರಿಗಳು ಆಡಳಿತ ಮಂಡಳಿಯ ̧ಸದಸ್ಯರಾಗಿದ್ದಾರೆ. ನಿರ್ಮಿತಿ ಕೇಂದ್ರವು ಉತ್ಪಾದನಾ ಘಟಕವನ್ನು ಹೊಂದಿದ್ದು, ಸಿಮೆಂಟ್ ಇಟ್ಟಿಗೆ, ಇಂಟರ್-ಲಾಕ್, ಕರ್ಬ್ ಸ್ಟೋನ್,ಬಾಗಿಲು, ಕಿಟಕಿ, ಚೌಕಟ್ಟು, ಸಿಮೆಂಟಿನ ಪಕ್ಕಾಸು, ರೀಪುಗಳು ತಯಾರಿಸಿ ಒದಗಿಸಲಾಗುತ್ತಿದೆ. ಜೊತೆಗೆ ಸಿಮೆಂಟಿನಿಂದ ವಿವಿಧ ರೀತಿಯ ಬೆಂಚು, ಮಂಚ, ಸ್ಲಾಬ್ ಇತ್ಯಾದಿಗಳನ್ನು ತಯಾರಿಸಿ ವಿ ವಿತರಿಸಲಾಗುತ್ತಿದೆ. ಮಿತವ್ಯಯ ಕಟ್ಟಡ ತಂತ್ರಜ್ಞಾನ,ಪರಿಸರ ಪ್ರಿಯ ತಂತ್ರಜ್ಞಾನವನ್ನು ಬಳಸಿ ಕಟ್ಟಡ ನಿರ್ಮಿಸುವುದು ಈ ಕೇಂದ್ರದ ವೈಶಿಷ್ಟ್ಯವಾಗಿದೆ. ಕಳೆದ 8 ವರ್ಷಗಳಿಂದ ̧ಸುಮಾರು 400ಕ್ಕೂ ಮಿಕ್ಕಿ ಯುವಕ-ಯುವತಿಯರಿಗೆ ವಿವಿಧ ಯೋಜನೆಗಳಡಿಯಲ್ಲಿ ತರಬೇತಿ ನೀಡಿರುವ ಹಿರಿ ಮೆ ಸಂಸ್ಥೆಯದ್ದಾಗಿದೆ. ಇಲ್ಲಿ ಆಗಿಂದಾಗ್ಗೆ ಹಮ್ಮಿಕೊಂಡಿರುವ ತರಬೇತಿ ಕಾರ್ಯಕ್ರಮಗಳಲ್ಲಿ ಮಿತವ್ಯಯ ಕಟ್ಟಡ ತಂತ್ರಜ್ಞಾನ ಅಳವಡಿಸಿ ಮನೆ ಕಟ್ಟುವ ಬಗ್ಗೆ ತರಬೇತಿ ನೀಡಲಾಗುತ್ತದೆ. ̧ಸದಾ ಬದಲಾಗುತ್ತಲೇ ಇರುವ ಫ್ಯಾಶನ್, ತಂತ್ರಜ್ಞಾನಕ್ಕೆ ಹೊಂದಿಕೊಳ್ಳಲು,ಸಂಶೋದನೆ ಮತ್ತು ಅಭಿವೃದ್ಧಿ ಕಾರ್ಯ ಇಲ್ಲಿ ಸದಾ ನಡೆಯುತ್ತಿರುತ್ತದೆ. ನೂತನ ತಂತ್ರಜ್ಞಾನ ಆಧಾರಿತ ಕಟ್ಟಡ ನಿರ್ಮಾಣ ವಸ್ತುಗಳ ಆವಿಷ್ಕಾರ -ತಯಾರಿಕೆ-ಬಳಕೆಗೆ ಹೆಚ್ಚು ಒತ್ತು ನೀಡಿದೆ. ಈ ನಿಟ್ಟಿನಲ್ಲಿ ಹುಡ್ಕೋ, ರಾಜೀವ್ ಗಾಂದಿ ಗ್ರಾಮೀಣ ವಸತಿ ನಿಗಮ, ಕಾರ್ನಿಕ್, ಎನ್.ಐ.ಟಿ.ಕೆ., ಸುರತ್ಕಲ್ ಇವುಗಳ ತಾಂತ್ರಿಕ ̧ಸಲಹೆ ಪಡೆಯುತ್ತಿದೆ. ಉತ್ಪನ್ನ ಕ್ಷೇತ್ರಕ್ಕೆ ಬಂದರೆ ಕಾಂಕ್ರೀಟ್ ಇಟ್ಟಿಗೆಗಳು, ಸಿಮೆಂಟ್ ಮಣ್ಣಿನ ಒತ್ತಿಟ್ಟಿಗೆ,ಸಿಮೆಂಟ್ ದಾರಂದಗಳು, ಕಿಟಕಿಯ ಚೌಕಟ್ಟುಗಳು, ಕಾಂಕ್ರೀಟ್ ರೀಪುಗಳು, ವಿವಿಧ ನಮೂನೆಯ ನೆಲದ ಹಾಸುಗಳು, ಫೆರೋಸಿಮೆಂಟಿನ ಪೀಠೋಪಕರಣಗಳು ಮತ್ತಿತರ ಆಕರ್ಷಕ ಉತ್ಪನ್ನಗಳು ಇಲ್ಲಿ ರೂಪುಗೊಳ್ಳುತ್ತದೆ. ಜಿಲ್ಲೆಯ ಜನರ ಅಭಿರುಚಿಗೆ ತಕ್ಕಂತೆ ಮನೆ ನಿರ್ಮಿಸುವುದು ಕೇಂದ್ರದ ವೈಶಿಷ್ಟ್ಯವಾಗಿದ್ದು, ಜಿಲ್ಲೆಯ ಹಲವು ಖ್ಯಾತಿ ಹಾಗೂ ಸರ್ಕಾರಿ ಕಟ್ಟಡಗಳನ್ನು ರೂಪಿಸಿದ ಹಿರಿಮೆ ಹೊಂದಿದೆ. ಖಾಸಗಿ ಕಟ್ಟಡಗಳಲ್ಲಿ ಇವು ಪ್ರಮುಖವಾಗಿದೆ.ಸರ್ಕಾರಿ ಕ್ಷೇತ್ರದ ಕಟ್ಟಡಗಲಲ್ಲಿ ಜಿಲ್ಲಾದಿಕರಿಗಳ ನಿವಾಸ ಸ್ಥಳೀಯ ಜನ ಪ್ರತಿನಿಧಿಗಳ ನಿವಾಸದ ವಿನ್ಯಾಸ ಪ್ರಮುಖವಾಗಿದೆ. ನಿರ್ಮಿತಿ ಕೇಂದ್ರ ಮತ್ತದರ ಕಾರ್ಯ ಚಟುವಟಿಕೆಯ ಬಗ್ಗೆ ಸುರತ್ಕಲ್ ಎನ್.ಐ.ಟಿ.ಕೆ., ಕೆಲವೊಂದು ನೂತನ ತಂತ್ರಜ್ಞಾನ ಬಳಸಿ, ಅತೀ ಕದಿಮೆ ವೆಚ್ಚದಲ್ಲಿ ಅಂದದ ಮನೆ ನಿರ್ಮಿಸಬಹುದು ಎಂಬುದನ್ನು ಸಾಧಿಸಿ ತೋರಿಸಿದ ಜಿಲ್ಲಾ ನಿರ್ಮಿತಿ ಕೇಂದ್ರದ ವೈಶಿಷ್ಟ್ಯಗಳನ್ನು ಈ ರೀತಿಯಾಗಿ ಪಟ್ಟಿ ಮಾಡಬಹುದು. ಕಮಾನುಗಳು : ಮನೆಯ ಅಂದ ಹೆಚ್ಚಿಸಲು ಅತ್ಯಂತ ಸರಳ ಸುಂದರ

ನಮ್ಮ ತರಬೇತಿಗಳು

Tharabeti

ನಮ್ಮ ಸ್ಥಳ ನಕ್ಷೆ